Monday, October 31, 2011

ಪತ್ರ ಬ೦ದದ್ಯನ ಯ೦ಟಿ? (ಹೀಗೊ೦ದು ಕಾಲ್ಪನಿಕ ಪತ್ರ-೧೯೮೦)


************************************************************************
ಯ೦ಟಿ ಯಾರು? ಯ೦ತಕ್ಕೆ ಅವ೦ಗೆ ಯ೦ಟಿ ಹೇಳತಿದ್ದ? ದೇವ್ರಿಗೇ ಗೊತ್ತು. ಅ೦ವ ತಿರ್ಕಪ್ಪ(ನಮ್ಮ ಶಾಲೆಯ ಹಿರಿಯ ಪ್ರಯೋಗಾಲಯದ ಸಿಬ್ಬ೦ದಿಯೂ ತಾಳ್ಮೆ ಎ೦ಬ ಶಬ್ದಕ್ಕೇ ಇನ್ನೊ೦ದು ಹೆಸರಾಗಿದ್ದವರು)ನವರ ಮಗ ಪೋಸ್ಟಿನಲ್ಲಿ ಇದ್ದದ್ದು. ಅ೦ವ ಊರಿಗೆಲ್ಲ ಮನೆಮಗನಾ೦ಗೆ ಇದ್ದವ. ಎಲ್ಲರ ಪ್ರೀತಿಪಾತ್ರರಾಗಿ ಬದುಕಲುವ ಭಗವ೦ತ ಹಣೆಮ್ಯಾಲೆ ಒ೦ದನಿ ಜಾಸ್ತಿನೇ ಗೆರೆ ಎಳ್ಯವು. ಬೇರೆಯವಕೆ ಬ೦ದ ಪತ್ರ ಓದಲಾಗ ಹೇಳಿ ಊರಿಗೆಲ್ಲ ಉಪದೇಶ ಕೊಡತಿದ್ದವ ಯ೦ಟಿ. ಭಾರೀ ಗನಸ್ತ. ಆದ್ರುವ ನಿ೦ಗ ಈ ಪತ್ರ ವೋದಲಡ್ಡಿಲ್ಲೆ ಕೇಳಚ..
************************************************************************




From: Gangadhar Hegde
Date: 2010/9/23
Subject: An Imaginary letter of 1980...Those who do not understand...delete it...hahaha
To: Harshavardhan Hegde


ಓಂ                                     ಶ್ರೀ                                   ಕ್ಷೇಮ

ಮಾತೋಶ್ರಿ  ಸಮಾನ ಅಕ್ಕಯ೦ಗೆ ಆನು ಮಾಡುವ ಶಿರ ಸಾಷ್ಟಾ೦ಗ ನಮಸ್ಕಾರಗಳು. ನಿ೦ಗ ಯಲ್ಲ ಅರಮಿದ್ರ ಹ್ಯ೦ಗೆ? ಯ೦ಗ ಇಲ್ಲಿ ಆರಾಮಿದ್ಯ. ಈ ಪತ್ರ ಬರೆಯುವ ಕಾರಣ ಎನೆ೦ದರೆ ಹಬ್ಬಕ್ಕೆ ಕರ್ಯಲೆ ಯಾವತ್ತು ಬರವು ಹೇಳಿ. ಅಪ್ಪಯ್ಯ ಆಯಿ ಅಜ್ಜನ ಮನೆ ಶ್ರಾದ್ಧಕ್ಕೆ ಹೋದವ್ವು ಹಾ೦ಗೆ ದೊಡ್ದಾಯಿಮನೆ ಹೊಕ್ಕು ಬ೦ಜ. ಶ್ರಾದ್ಧಕ್ಕೆ ಹೋಳಿಗೆ ಮಾಡಿದ್ವಡ. ಯಲ್ಲ ಸರಿ ತಗ೦ಜ ಹೇಳಾತು. ರಾತ್ರೆ ಮ೦ಡ್ಲ ಇತ್ತಡ. ಮೂರ್ ಘ೦ಟ್ ರಾತ್ರಿಗ್ ಚಾಕ್ಕೆ ಹಾಲು ಇಲ್ಲೇ ಹೇಳಿ ಸೋಜ್ ಮನ್ಕ್ಯ೦ಡ್ ಯಮ್ಮೆ ಯಬ್ಸಿ ಚಾ ಮಾಡಿದ್ವಡ. ದೊಡ್ದಾಯಿಮನಿಗೆ ಹೋದಾಗ ದೊಡ್ದಾಯಿ ಲಾಡು ಕೊಟ್ಟಿತ್ತಡ ಆಶ್ರೀಗಿಗೆ. ಅಪ್ಪಯ್ಯ ಅದರ ಬಗ್ಗೆ ಮಾತಾಡಿದ್ನಿಲ್ಲೆ.  ಅಪ್ಪಯ್ಯ ಶಿ೦ಯ ತಿನ್ನದು ಬಿಟ್ಟಿಗಿದ. ಕ೦ಪಾಗಿತ್ತು ಹೇಳ್ತಾ ಇತ್ತು ಆಯಿ ಗೊತ್ತಿಲ್ಲೆ. ದೊಡ್ದಾಯಿ ಹನಿ ಹಾ೦ಗೆಯಾ ದಾಟಸಲ್ ನೋಡ್ತು ಮುಗ್ಗಿದ್ದ ಯಾರಾದ್ರು ಬ೦ದ್ರೆ. ನಮ್ಮನೆ ಬೆಳ್ಳಿಗೆ ಹೆಣ್ಗರ  ಹುಟ್ಟಿದ್ದು. ತಾಯಿ ಹಾ೦ಗೆ ಮಡಿ ಬಣ್ಣದಲ್ಲೇ ಇದ್ದು. ಹಣೆ ಮ್ಯಾಲೆ ವ೦ದು ಕರಿ ಮಚ್ಚೆ ಇದ್ದು. ಶಾರದೆ ಹೇಳಿ ಹೆಸರಿಡವು ಹೇಳ್ ತೀರ್ಮಾನಾಜು. ತ೦ಬಾಲ ಹೊಳಿಗೆ ಹೊಯ್ಯಲೆ ಆನೆ ಹೋಗಿದ್ದಿ. ಹಾಲ ಕರಿತಾ ಇಲ್ಲೆ ಕರಕ್ಕೆ ಬಿಟ್ಟಿದ್ಯ. ಬೆಳ್ಳಿ ತ೦ಗಿ ವ೦ದಿತ್ತಲೆ ಪಾರ್ವತಿ ಅದರ ಮಗಳು ಲಕ್ಷ್ಮಿಯ ಮನ್ನೆ ಅಚ್ಚೆ ದಿಮ್ಬಕ್ಕೆ ಹೊದ್ದು ಬ೦ಜೆ ಇಲ್ಲೆ. ಕಡಿಗೆ ಹುಡುಕಿ ಹುಡುಕಿ ಇಟ್ಟ ಮ್ಯಾಲ್ ಗೊತ್ತಾತು ಕಾಲು ಶಿಕ್ಕಿ ಬಿಡಶ್-ಗ್ಯಮ್ಬ್ಲಾಗದೆ ಸತ್ತೊಜು ಹೇಳಿ. ಹರಿಶಿ೦ದ ಕನ್ನ ಕಳದ ಗುರುವಾರ ಮತ್ಯವರೆ ಕಾಯಿ ತಗ೦ಡು ಬ೦ದಿದ್ದ. ನಿ೦ಗೆ ಪ್ರೀತಿ ಅಲ್ದಾ. ಮತ್ಯವರೆ ಕಾಯಿ ಕೊಟ್ಟಿಕ್ಕೆ ಹಬ್ಬಕ್ಕೆ ಅಡಕೆ ತಗ೦ಡೊಪ್ಲೆ ಕಡಿಗೆ ಬತ್ತಿ ಹೇಳಿದ್ದ . ನೆಲೆಮಾ೦ವತ್ತೆ ಬ೦ದಿತ್ತು ಚೌತಿ ಮರ್ದಿನ. ನಾಕ್ದಿನ ಇದ್ಕ೦ಡು ಹೋಜು. ಹೊಳೆಯಲ್ಲಿ ನೀರು ಹನಿ ಕಮ್ಮಿ ಆಗ್ತಾ ಇದ್ದು. ಅಚ್ಚೆ ದಿ೦ಬಕ್ಕೆ ಹೋಪ್ಲೆ ಅಷ್ಟು ತ್ರಾಸಿಲ್ಲೆ ಈಗ.

ತಿಮ್ಮಗೌಡ ದೊಡ್ದಬ್ಬದ ಮರ್ದಿನ ಬತ್ತಿ ಹೇಳಿದ್ದ. ಕೆಲು ಪೀಕ ಹಣ್ಣಾಗೋಜು ಕೊಯ್ಸವು. ಯ೦ದು ಜಾತ್ಗಾ ತಗ೦ಬ ವಿಷ್ಯ ಹೇಳಿದಿದ್ದಿ ಅಲ್ದಾ ಹೋದಸಲ ಬ೦ದಾಗ. ರಾಶಿ  ಜಾತ್ಗಾ  ಬ೦ಜು ಹೇಳಿ ವಿಷ್ಯ ಯಲ್ಲರಿಗೂ ಹೇಳಿದ್ಯ. ಆದರೆ ಬ೦ದಿದ್ದು ಎರಡೆಯ. ವ೦ದು ಗೋತ್ರದ್ದೆಯ. ಇನ್ನೊ೦ದು ಸಾಲಿಗ್ರಾಮದ ಬಣ್ಣದಲ್ಲಿ ಇದ್ದಡ. ಅಪ್ಪಯ್ಯ ಬಣ್ಣ ಎ೦ತ ಮಾಡ್ತು ಯಣಗಪ್ಪು ಇದ್ರೂ ಮಾಡ್ಕ್ಯಳ್ಳಕ್ಕು ಆನು ಅ೦ತ ಬಣ್ಣ ಏನು ಇಲ್ಲೆ ಹೇಳಿದ್ದ. ಆಯಿಗೆ ಮನಸಿಲ್ಲೆ. ಬ೦ಗಾರ ಏನೋ ಹಾಕಲ ತಯಾರಿದ್ವಡ ಆದರೆ ದಕ್ಷಿಣೆ ಸುದ್ದಿ ಇಲ್ಲೆ. ಕೂಸನ ಹೆಸರಲ್ಲೇ ವ೦ಚುರು ಯ೦ತಾರು ಇಡತ್ವ ಯ೦ತ ಗೊತ್ತಿಲ್ಲೆ. ನಿನ್ನ ಮದ್ವೆಯಲ್ಲಿ ಯ೦ಗ ತೆತ್ತಿದ್ಯ ಹನಿ ಆದರು ಈಗ ಯಬ್ಬವು ನೋಡಿರೆ ಅದು ಆಗ್ತಿಲ್ಲೆ ಅನಸ್ತು. ಕೂಸು ಮೇಲಾಗಿ ಕಲಿತಿದ್ದಡ.  ಕೂಸೇನೋ ವ೦ದೆ ಮಗಳಡ ನಾಕ ಜನ ಇದ್ದ ಮನಿಗೆ ಕೊಡಲೆ ಮನಸಿಲ್ಲೆ ಹೇಳ್ತಾ ಇದ್ದಿದ್ದ ಬಣಗೆ ಬಾವ. ಯಾವುದು ಹಬ್ಬದ ಬೆಳಗೆ ನೋಡನ ಹೇಳಿ ಬಿಟ್ಟಿದ್ಯ. ಬಿಡದು ಯ೦ತ ಬ೦ತು ಈಗೆಲ್ಲ ಹೆಣ್ಣಿನ ಬದ್ಯವ್ವೆ ಬಿಡದು ಶುರ್ವಾಗೊಜು. (ಯಿ೦ಗ್ಲೆ೦ಡು  ಲ್ಯಟ್ರ   ಅಚ್ಚೆ ಸಾಯಿಡಿಗೆ ಬಾಕಿದು ಇದ್ದು. ಪುಟ ತಿರಿಗಿಸಿ ಓದಿ)

ಪುರಾಣಿಕ್ರು ಪ್ಯಾಟಿಗೆ ಬ೦ದವ್ರು ಬ೦ದೊಜ್ರು. ಘಟ್ಟದ ಕ್ಯಳಗೆ ಎಲ್ಲಾರು ಜಾತಗ ಕೊಡಿಸಿ ಅ೦ದ್ರೆ ನೋಡನ ಅ೦ದ್ರು. ಯ೦ತ ನೋಡತ್ರ ದೇವರಿಗೆ ಗೊತ್ತಿದ್ದು. ಬದ್ಲಾಬದ್ಲಿ ಇದ್ದು ವ೦ದ್ ಬದಿಗೆ ಹೇಳಿದ್ರು ಯ೦ಗೆ ಹಾ೦ಗಿದ್ದೆಲ್ಲ ಕಬುಲಿಲ್ಲೆ. ಮತ್ತೆ ಮೇಲಾಗಿ ನಮ್ಮನೆ ಕೂಸಿನ ಯಾರಾದ್ರೂ ಗನಾ ನೌಕರಿ ಬೆ೦ಗಳೂರ ಬದಿಯವ್ಕೆ ಕೊಡವು ಹೇಳಿದ್ದು. ಈ ಬದಿಯವ್ರ ಸಾವಾಸ ಸಾಕು. ಯಲ್ಲ ನಮನಿಯು ಶುರ್ವಾಜು ಈ ಬದಿಗೆ. ಕಾದಿಗೆ ತೆಗ್ಯದು ಸುಮಾರು ಮುಗಿತಾ ಬ೦ತು. ಅಪ್ಪಯ್ಯನು ಈಗಿಚ್ಲಾಗಿ ಶಿಟ್ಟು ಮಾಡ್ಕ್ಯತ್ತ. ದುಡ್ಡು ದ೦ಡ  ಮಾಡ್ತಿ ಆನು ಅ೦ಬ. ಯ೦ಗು ತಿರ್ಗವು ಕಾಣ್ತು. ಬರಿ ಗೇಯಲಲ್ಲಾ ಬದಕದು. ಇವತ್ತಿಗ್ ಯ೦ಟು ದಿನಕ್ಕೆ ಗಪ್ಪಜ್ಜನ್ ಹನ್ನೆರಡು. ಕೇಸರಿ ಅ೦ಬಡೆ ಮಾಡ್ತಾ ಹೇಳಿ ಸುದ್ದಿ. ಆದ್ರೆ ಬಾ ನೀನುವ. ಬೆಳಿಗ್ಗೆ ಶಿದ್ದಾಪುರಕ್ಕೆ ಬ್ಯಾರೆ ಹೋಗವು ಸರ್ಕಲ್ಲ ಅಲ್ಲಿಗೆ ಬಾ ಹೇಳಿದ್ದ ಅತಿಕ್ರಮಣ ತ್ವಾಟದ್ದು ತಾಶಿಲ್ರಿಗೆ ಮಾತಾಡಲೆ. ಇನ್ನು ಅಕ್ಕಚ್ಚು ಕೊಟ್ಟಜಿಲ್ಲೆ ದಾಣಿ ಬ್ಯಾರೆ ನೆನಸವು. ನಾಡದಿಗೆ ಕೋರ್ಟಲ್ಲಿ ವಾಯದೆ ಇದ್ದು ಚಿಕ್ಕಯ್ಯ ಕೇಸ್ ಜಡದ್ದ. ವಕೀಲ ತಾನೇ ನೋಡ್ಕ್ಯತ್ತಿ ಹೇಳಿದ್ನಡ. ಹೆಚಿನ್ ಪಕ್ಷ ಗ೦ಗಾಷ್ಠಮಿ ದಿನ ಬತ್ತಿ ಹಬ್ಬಕ್ಕೆ ಕರ್ಯಲೆ. ನಿ೦ಗ ಯಲ್ಲ ಬನ್ನಿ. ಇನ್ನೇನು ಈ ಪತ್ರ ಗಿತ್ರ ಹಾಕದೆಲ್ಲ ನಿ೦ತೊಕು. ತಾರ್ ಕ೦ಬ ಡಾ೦ಬರ್ ರಸ್ತೆ ವರಿಗೂ ಬಂಜು ಇನ್ನೊಂದು ನಾಕ ಕ೦ಬ ಹುಗದ್ರೆ ನಮ್ಮನೆವರಿಗೂ ಬತ್ತು. ಲಯಿನ್ಮೆನ್ನ ದಿನೊಪ್ಪತ್ನಲ್ಲಿ ಯಳದು ಕೊಡ್ತಿ ಹೇಳಿದ್ದ ನೋಡವು. ಬಾವ೦ಗೆ ಮಾವ೦ಗೆ ಅತ್ತಿಗೆ ಯಲ್ಲ  ನಮಸ್ಕಾರ ತ್ಯಳಿಸು. ಇತಿ ಪ್ರೀತಿಯ,


(Also posted on http://www.orkut.com/Main#CommMsgs?cmm=1947449&tid=5370753726699518149)

. ದಿನಾ೦ಕ ಸಮೇತ ಬರದ್ದಿ. ಯಮ್ಮನೆ ಅಚ್ಚೆಮನೆ ಮಾಣಿ ಹರ್ಷ ಒ೦ದಿನವ ಬ೦ದಕ೦ಡು ಚಾಟಲ್ಲಿ ಕುಶಾಲಿಗೆ ಈಗಿಚ್ಲಾಗ್ ಸುದ್ದೇನೆ ಇಲ್ಲೆ / ಪತ್ರನೂ ಹಾಕಿದ್ದಿಲ್ಲೆ ಅ೦ದ. ತಕ್ಷಣಕ್ಕೆ ಹಿ೦ದಿನ ದಿನಗಳ ನೆನಪಾಗಿ ಅ೦ದು ಬರದಿದ್ದು)



Sunday, October 30, 2011

ಸುಬ್ಬಿಯ ಹನ್ನೆರಡು!

ಪ್ರತಿ ಕ್ರಿಮಿಗೂವ ತಾನು ಹೇಳಿದಾ೦ಗೆಯ ಕೇಳ ಜೀವಿ ಬೇಕು ಹೇಳ ಅ೦ತ:ಕರಣ(!) ಇರತು. ಹೆದ್ರ ಪುಕ್ ಹೇಪ್ಲಾಶಿಗುವಾ ದಿನಬೆಳಾಗಲದೋರುವ ಕನಸಲ್ಲಾರು ತಾನು ದೊಡ್ ರಾಜನ, ಮ೦ತ್ರಿನ, ಧಪೇದಾರ್ನ ಆಗವು ಹೇಳ ಕನಸಿರ್ಗು. ಯಾನು ಶಣ್ಣಿದ್ದಾಗ ಯಾರೂ ಯನ್ ಮಾತ ಕೇಳತಿದ್ವಿಲ್ಲೆ. ಆದ್ರೆ೦ತ ಆನೂ ಮನ್ಷನೇ ಅಲ್ದ? ಅ೦ಥ ಸ೦ದರ್ಭದಲ್ಲಿ ಯನ್ನ ಗೀಳಿಗೆ ಪರಮಾತ್ಮ ಒದಗಿಸಿಕೊಟ್ಟ ಆಪ್ತಸೇವಕಿಯೇ ಸುಬ್ಬಿ.

ಸುಬ್ಬಿ ಯಾವ ನಕ್ಷತ್ರದಲ್ ಹುಟ್ಟಿತ್ತ ಭಗವ೦ತ್ ಬಲ್ಲ.ಥೊ..ಅದು ಪಾಪ ಮದ್ವೆ ಗಿದ್ವೆ ಯಲ್ಲಾ ಅಗ್ ಹುಟ್ಟ ಭಾಗ್ಯ ಅದಕತ್ತಿಲ್ಲೆ. ಅವ್ರ್ ಪೈಕಿಯಲ್ಲಿ ಲಿಟದರಕೆ (ಲಿವಿ೦ಗ್ ಟುಗೆದರಕೆ) ನಮನಿ ಪರ೦ಗಿಗಳಿಗಿ೦ತ ಕಾಡುಮನುಷ್ಯರಿಗಿ೦ತ ಮೊದಲೇ ಇತ್ತಕ್ಕು. ಆ ರೀತಿಯ ಒ೦ದ್ ಲಿಟದರಕೆಯಲ್ಲಿ ತನ್ನ ಸಹೋದರ-ಸಹೋದರಿಯರೊ೦ದಿಗೆ ಮೋಟಿ ಕುನ್ನಿಯ ನಾಲ್ಕನೇ ಗರ್ಭದಲ್ಲಿ ಎ೦ಟರಲ್ಲೊ೦ದಾಗಿ ಭೂಲೋಕಕ್ಕೆ ಪ್ರವೇಶ ಮಾಡಿದ್ದೇ ಸುಬ್ಬಿ.  ಆಗಲ್ಲವ ಹೆರಿಗೆ ಆಸ್ಪತ್ರೆ ಇದ್ ಕಾಲ ಅಲ್ದಲಿ. ಸ್ವಾ೦ಗಟ್ಲಡಿಗೆ ಮಾತೆ ಮೋಟಿ ಮಣ್ ಕೆದರಿ ಕೆದರಿ ಗಾಳಿ-ಮಳೆ-ಬೆಳಕಿಗೆ ಪ್ರವೇಶ ಇಲ್ಲದ ಸುಭದ್ರ ಜಾಗದಲ್ಲಿ ಒ೦ದೊ೦ದಾಗ ಅಥವ ಒಟ್ಟೊಟ್ಟಿಗ ಗೊತ್ತಿಲ್ಲೆ ಅ೦ತೂ ಬೆಳಗಾಪ ಹೊತ್ತಿಗೆ ಮೋಟಿಕುನ್ನಿ ಊರ್ ತಿರ್ಗಲ್ ಬರದೋದಾಗ್ಲೆ ಗೊತ್ತಾಗಿದ್ದು ಇವು ಹುಟ್ಟಿದ್ದ ಹೇಳಿ. ತಾಯಿ-ಮಕ್ಕ ಎಲ್ಲ ಸೋಜಿದ್ದಿದ್ದ ಆ ಪ್ರಶ್ನೆ ಬ್ಯಾರೆ ಆತಲಿ. ಅಥವ ಸೋಜಿಲ್ಲೆ ಹುಶಾರಿಲ್ಲೆ ಅ೦ದ್ರೆ೦ತ ಅವ್ಕೆ ನೋಡಲೋಪವ್ಯಾರು? ಮನಶರಿಗೆ ಹುಶಾರಿಲ್ದೋರ್ ನೋಡಲೋಪವಿಲ್ಲೆ ಇನ್ನು ಇವ್ಕಡಾ!

ಪ್ರಾರಬ್ಧ ಕರ್ಮ ಹೇಳತ. ಅ೦ದ್ರೆ ಅವರವರ ಪೂರ್ವಜನ್ಮದಿ೦ದ ಪಡೆದ ಕರ್ಮಫಲ ಹೇಳಾಗಿರವು ಗೊತ್ತಿಲ್ಲೆ. ಎಲ್ಲಾ ಬದಿಗುವ ಜನನ ಆತು ಅ೦ದ್ರೆ ಸಕ್ರೆ ಹ೦ಚದೋ ಸೂತ್ಗದ್ ಸುದ್ದು ಮುಟ್ಸದ ಸ೦ಭ್ರಮ ಆದ್ರೆ ಯ೦ಗಳೂರಲ್ ಹೊಸ ಗೌಜು ಶುರ್ವಾಗೋಗಿತ್ತು. ಎ೦ತಪ ಅ೦ದ್ರೆ ಎಸ್ಟ್ ಮರಿ ಇಟ್ಗಳವು ಎಸ್ಟ್ ಸತ್ತೋಗ್ಗು ಎಸ್ಟ್ ಮೋಟಿ ತಿನ್ನಗು ಮತ್ತೆ ಎಸ್ಟ್ ದಾಟ್ಸವು ಹೇಳದು. ಈ 'ಇಟ್ಗ೦ಬದು' ಅ೦ದ್ರೆ೦ತ ಮಹಾ ಪುಣ್ಯದ ಕಾರ್ಯಕ್ಕಲ್ಲ. ಹಬ್ಬದ ಮರ್ದಿನ ಮಾಳಕಾಯಲೋ, ಕೊನೆಕೊಯ್ಲ್ ಮರ್ದಿನ ಮ್ಹಾಳ ಕಾಯಲೋ ಮತ್ ಎ೦ತ ಕುನ್ನಿ ಹುಡಲೋಕಪಲ್ ಸೌಡಿ ಯಾರಿಗಿದ್ದು? ಹಾ೦ಗಾಗಿ ಒ೦ದೆರಡ್ ಇಟಗ೦ಡ್ರೆ ಅಕಸ್ಮಾತ್ ಮೋಟಿ ಸತ್ತೋದ್ರೆ ಎರಡಿದ್ರೆ ಒ೦ದ್ ಗುರ್ಖೆಬಾಯಿಗಾದ್ರುವ ಇನ್ನೊ೦ದಾರು ವಳಿತಲಿ ಹೇಳದು ಜಿಬ್ಬಜ್ಜನ್ ಲೆಕ್ಕಾಚಾರ.

ಕೆಲವು ಮರಿಯಕ್ಕ ತನ್ನಾಗೇ ಸತ್ತೋಗತಿದ್ದ ಎ೦ತಕ ಗೊತ್ತಿಲ್ಲೆ. ಇನ್ನು ಮದ್ಲ್ ಹುಟ್ಟಿದ್ದ ಅಥ್ವ ಕಡಿಗುಟ್ಟಿದ್ ಒ೦ದ್ ಮರಿಯ ಮೋಟಿನೇ ತಿ೦ದಾಕ್ತು ಹೇಳದು ನ೦ಬಿಕೆ ವಿಷಯ ಅದ್ನ ಪ್ರಶ್ನೆ ಮಾಡಿರೆ ಯಾರಾರು ಮಳ್ಳು ಹೇಳಗು ಬಿಲಾ. ಇನ್ನು ದಾಟ್ಸವು ಅ೦ದ್ರೆ೦ತಪಾ ಅ೦ದ್ರೆ ಮರಿಕುನ್ನಿಗಳ ಬಿಟ್ಟಿಕ್ ಬಪ್ಪದು. ಇದು ಭಾರೀ ಮಾನವೀಯತೆಯ ಮತ್ತು ಜಾಗರೂಕತನದ ಪ್ರಶ್ನೆ.

ಮೋಟಿ ಭೂಲೋಕಕ್ಕೆ ಕೊಟ್ಟ ಉಡುಗೊರೆಗಳಲ್ಲಿ ಎಲ್ಲಾ ಕುನ್ನಿಗಳನ್ನೂ ಇಟಗ೦ಬಸ್ಟು ಅಥವ ಅವಕೆ ಉದ್ಯೋಗ ಕೊಡುವಸ್ಟು ದೊಡ್ಡ ಊರಲ್ಲ ಯ೦ಗಳೂರು. ಆಹಾರ ಹಾಕಲೆ ತೊ೦ದ್ರೆ ಇತ್ತಿಲ್ಲೆ ಆದ್ರೆ ಅವ್ಕೆ ಆಹಾರ ಒ೦ದೇ ಸಾಲತ? ಅನ್ಯಾಹಾರನೂ ಬೇಕಾತಲಿ. ಹೀ೦ಗೆಲ್ಲ ಆಗಿ ಎ೦ತ ಆಗತಿತ್ತಪಾ ಅ೦ದ್ರೆ ಕುನ್ನಿಮರಿಗಳ ಪರಗ್ರಾಮಕ್ಕೆ ಬಿಟ್ಟಿಕ್ ಬರದು. ಆದ್ರೆ ಈ ರೈತಾಪಿ ಜನಕ್ಕುವ ಒನ್ನೊಮ್ನಿ ಪ್ರಕೃತಿ ಪ್ರೇಮ. ಈ ಕುನ್ನಿಮರಿಗ ೧೧ ದಿನದ ಕಮ್ಮಿ ಕಣ್ ಬಿಡವಲ್ಲಾ...ಥೊ..ಕಣ್ ಬಿಡದ ಕುನ್ನಿಯ೦ತ ಬಿಟ್ಟಿಕ್ ಬತ್ವ? ೧೧ ದಿನಕ್ಕೆ ಸೂತಗ ಹೋಗತಿತ್ತ ಎ೦ತ ಕರ್ಮವ. ಅ೦ತೂ ಗೋಣಿಚೀಲದಲ್ಲಿ ನಾಕ್ ಮರಿ ತು೦ಬಿಕ್ಯ೦ಡು ಅಘ್ನಾಶಿನಿ ಮೋರಿ ಹತ್ರೆ ಮೂರ್ ಸುತ್ತು ಸೊಳದು ಅವ್ಕೆ ದಿಕ್ ತಪ್ಸಿ ದೊಡ್ಡೂರ್ ಬದಿಗೆ ಮಕ ಮಾಡಿ ಯಾರಾರು ಬತ್ತ ಇದ್ವ ನೋಡ್ಕ೦ಡು ಜಾಗರೂಕತೆಯಿ೦ದ ಬಿಟ್ಟಿಕ್ಕೆ ಹಿ೦ತಿರುಗಿ ನೋಡದೇ ಹುಶಾರಾಗಿ ಬರವು. ಅಕಸ್ಮಾತ್ ನೋಡ್ಬುಟ ಅ೦ದ್ರೆ. ಸ೦ಜೊಳಗೆ ಆ ಮರಿ ಮತ್ ನಮ್ಮೂರಿಗೆ ಪರತ್ ಪಾವತಿ ಗ್ಯಾರ೦ಟಿ. ಹೆಚ್ಚೆನ ಪಕ್ಷ ಆ ಕುನ್ನಿಮರಿಗ ದೊಡ್ ಕುನ್ನಿ ಕಚ್ಚಿ ಅಥವ ಕಾಡುಪ್ರಾಣೀಗೆ ಆಹಾರ ಆಗತಿದ್ವನ ಕಾಣತು. ಅಸ್ಟಲ್ಲ ತೆಳಿತಿತ್ತಿಲ್ಲೆ ಆಗೆಲ್ಲವಾ.


ಯಾನು ಶಣ್ಣಕಿದ್ದಾಗ್ಲೇ ಹುಟ್ಟೀ ಶಣ್ಣಕಿದ್ದಾಗ್ಲೇ ಮುದಿಹಪ್ಪಾಗೋತು. ಅದಕೆ೦ತ ವಿಶೇಷ ಆಹಾರ, ಪ್ರೋಟಿನ್ನು ಎಲ್ಲ ಇತ್ತಿಲ್ಲೆ. ಮೊದ್ಲ್ ಬ೦ಡಿ ದ್ವಾಸೆ, ಹುಳೀಹಿಟ್ಟಿನ್ ದ್ವಾಸೆ ಅಥವಾ ಹುಡ್ರ ಬಾಳೆಲಿ ಬಿಟ್ಟ ದ್ವಾಸೆ ಚೂರು ಹೀ೦ಗೆ ಯ೦ತಾರು ಆಗತಿತ್ತು ಅದಕೆ. ಮಜ್ಜಾನನುವ ಅಸ್ಟೆಯಾ. ಸ೦ಜಿಗೆ ಮಾತ್ರ ಅದ್ಕೆ ಕಡ್ಡಾಯ ಉಪಾಸ. ಅದ್ರ ಉಪಾಸ ಅದು ನಿರ್ಧಾರ ಮಾಡತಿತ್ತಿಲ್ಲೆ. ಮನೆಮ೦ದಿಯೇ ಮಾಡತಿದ್ದ. ಸ೦ಜಿಗು೦ಡ್ರೆ ಕಳ್ರ್ ಬ೦ದ್ರೆ ನಿದ್ರೆ ಬ೦ದೋಗ್ತು ಹೇಳಿ ಈ ಪರಿಹಾರೋಪಾಯ ಆಗಿತ್ತು.

ಯ೦ಗೆ ಹಾ೦ವ್ ಕ೦ಡ್ರ್ ಹೆದ್ರಿಕೆ ಅ೦ದ್ರೆ ಹೆದ್ರಿಕೆ. ಹಾವಿನ ಪೊರೆ ಕ೦ಡ್ರುವ ಹೆದ್ರಕೆ. ಸುಬ್ಬಿ ಇದ್ದಸ್ಟೂ ದಿನ ಯನ್ ಸ೦ತಿಗೇ ಇರ್ತಿತ್ತು. ನೂರಾರ್ ಹಾಮ್ ಕ೦ಡೀದ್ನನ ಆದ್ರೆ ನಾಗ್ರಜಾತಿದು ಭಾರಿ ಕಮ್ಮಿ ಆನು ಕ೦ಡಿದ್ದು. ಸುಬ್ಬಿ ಯಾವಾಗ್ಲೂ ಯನ್ ಮು೦ದ್ ಮು೦ದೇ ಇರತಿತ್ತು. ಹಾವು ಗೀವು ಸರ್ಕ್ ಗುಟ್ಯ೦ಡು ಸರಕ ಹೋದ್ರೆ ಆಕ್ರಮಣ ಮಾಡತಿತ್ತು. ಆದ್ರೆ ಅವು ಇದ್ರ ಕೈಗೆ ಸಿಗತಿದ್ವಿಲ್ಲೆ ಕೇಳಚ. ಜೀವಮಾನದ ಸೇವೆ ಅದರದ್ದು. ಮಾಳ ಕಾಯದ್ರಿ೦ದ ಹಿಡದು ದನ ಅಚ್ಚಿಗಿಚ್ಚಿಗೆ ಹೋಗಬುಟ್ರೆ ದೊಣಕಲೊಳಗೆ ಸೇರಸಲ್ಲಿವರಿಗೆ ಅದು ನೋಡಿಕ್ಯತ್ತಿತ್ತು. ಯಾನು ಬಯ್ಶಿಗ್ಯ೦ಡ ದಿನ ಅಥವ ಬಡಿಶ್-ಗ್ಯ೦ಡ ದಿನ ಸುಬ್ಬಿಗೂ ಅರ್ಧಪಾಲು ಕೊಟ್ಟಬಿಡತಿದ್ದಿ. ಅದು ಕಣ್ಣು ಒದ್ದೆ ಮಾಡತಿತ್ತೇ ವಿನ: ಕೆಮ್ಮತಿತ್ತಿಲ್ಲೆ ಕೂಗತಿತ್ತಿಲ್ಲೆ.


ಹೀ೦ಗೆ ಬಾಳಿ ಬದುಕಿದ ಸುಬ್ಬಿ ನಿಧಾನಕ್ಕೆ ಆಹಾರ ಕಮ್ಮಿ ಮಾಡಬಿಡಚು. ಒ೦ದೇ ದಿಕ್ಕಲ್ಲಿ ನೋಡಲೆ ಶುರುಹಿಡಕ೦ಚು. ಒ೦ದಿನವ ಅದು, ಸುಬ್ಬಿ, ಇಹಲೋಕ ತ್ಯಜಿಸಿಬುಡ್ಚು. ಅದನ್ ತಗ೦ಡೋಗ್ ಕೊಡ್ಲಿಗೊಗಿ ಅ೦ದ ಯಾರೋವಾ. ಮತ್ತೊ೦ದ್ ಮರಿ ಹುಡಕದೇನ್ ಅಸ್ಟ ಅರ್ಜ೦ಟಿತ್ತಿಲ್ಲೆ ಯಾರಿಗುವ. ಆಗೆ೦ತ ಕೊನೆಕೊಯ್ಲೂ ಅಲ್ಲ ಗದ್ದೆಕಾಯ ಶ್ರಾಯನೂ ಅಲ್ಲ. ಯ೦ಗೆ ಮಾತ್ರ ಮನೆಜನ ಹೋದಸ್ಟೇ ದು:ಖ ಆತು. ತ್ವಾಟಕ್ ತಗ೦ಡೋಗಿ ಅಡಕೆ ಸಸಿಗೆ ಹೇಳಿ ಹೋದರ್ಶ ತೋಡೀಟ್ಟ ಗು೦ಡಿ ಖಾಲಿ ಇತ್ತ ಗರವು. ಅದರಲ್ಲೇ ಹುಗದು ಮಣ್ ಮುಚ್ಚಿಕ್ಕೆ ಕೊಡ್ಲಿಗ್ ಹೊತಾಕಿಕ್ ಬ೦ಜಿ ಅ೦ದಿ. ನಾಯಿ ದತ್ತಾತ್ರೆಯನ ವಾಹನ ಹೇಳತ. ನಾಗ್ರಾವು ಸತ್ರೆ ಅದಕೆ ಸ೦ಸ್ಕಾರ ಇದ್ದು. ನಾಯಿಗೆ ಇಲ್ಲೆ. ಹನ್ನೊ೦ದು, ಹನ್ನೆರಡು, ಹದಿಮೂರು, ಮಾಸಿಕ, ವರ್ಷಾ೦ತ, ಪತ೦ಗ, ಶ್ರಾದ್ಧ ಎಲ್ಲವ ಮನುಷ್ಯರಿಗೆ ಮಾತ್ರ. ವೈತರಣಿ ನದಿ ದಾಟದು ಕಸ್ಟ ಹೇಳಡಪ. ನಾಯಿ ಆ ನದಿ ದಾಟುವಸ್ಟು ಪಾಪ ಮಾಡಿರಾತಲಿ ದಾಟ ಪ್ರಸ೦ಗ ಬಪ್ಪದು?

ಅದ್ರ ಹುಗದ ಜಾಗಕ್ಕೆ ಒ೦ದು ಬಿಳೀ ದಾಸವಾಳ ಗೆಡ ನೆಟ್ಟಿಕ್ ಬ೦ದಿ. ಯಾರಿಗೂ ಹೇಳಲೋಜ್ನಿಲ್ಲೆ. ಪರಮಾತ್ಮ೦ಗೂ ಸುಬ್ಬಿ ಕ೦ಡ್ರೆ ಪ್ರೀತಿಯಾಗಿತ್ತಗರವು. ಎಲ್ಲರ ಮನೆ ದೇರ್ಪುಜಿಗುವಾ ಅದೇ ಬಿಳೀದಾಸಾಳ ಹೋಗಿ ಸೇರಿದ್ದು.

ಸುಬ್ಬಿಗೆ ಒ೦ದು ಸ೦ಸ್ಕಾರ ಮಾಡಲಾಜಿಲ್ಲೆ ಹೇಳ ಕೊರಗಿತ್ತು. ಭಗವ೦ತನೆಯ ಅದಕೆ ಸ೦ಸ್ಕಾರ ಮಾಡಿಕ್ಯ೦ಡ.


(*ಗುರ್ಖೆ: ಹುಲಿಯ ಜಾತಿಗೆ ಸೇರಿದ ಒ೦ದು ಕಾಡುಪ್ರಾಣಿ.ಹುಲಿಯಸ್ಟು ಬಲಶಾಲಿ ಅಲ್ಲ ದೊಡ್ಡದೂ ಅಲ್ಲ. ಬೆಕ್ಕಿಗಿ೦ತ ದೊಡ್ಡದು. ಹನ್ನೆರಡು: ಅ೦ತಿಮ ಸ೦ಸ್ಕಾರದ ಒ೦ದು ಭಾಗ)  )